ಕೆ. ಪಿ. ಜಾನಕಿ ಅಮ್ಮಾಳ್ (೧೯೧೭-೧೯೯೨) ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ದ ರಾಜಕಾರಣಿ. ಇವರು ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘದ ಅಧ್ಯಕ್ಷರಾಗಿದ್ದರು. ಅವರು ೧೯೬೭ ರಲ್ಲಿ ತಮಿಳುನಾಡು ಶಾಸಕಾಂಗ ಸಭೆಯಲ್ಲಿ ಪೂರ್ವದ ಮಧುರೈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. == ಆರಂಭಿಕ ಜೀವನ == ೧೯೧೭ರಲ್ಲಿ ಜನಿಸಿದ ಅವರು ಪದ್ಮನಾಭನ್ ಮತ್ತು ಲಕ್ಷ್ಮಿ ದಂಪತಿಗೆ ಏಕೈಕ ಮಗು. ಅವರು ಆರಂಭಿಕ ಜೀವನವನ್ನು ಬಡತನದಲ್ಲಿ ಕಳೆದರು. ಅವರು ೮ ವರ್ಷದವರಿದ್ದಾಗ ಅವರ ತಾಯಿ ನಿಧನರಾದರು, ಮತ್ತು ಅವರನ್ನು ಅವರ ಅಜ್ಜಿ ಬೆಳೆಸಿದರು. ಸಂಗೀತವನ್ನು ಮುಂದುವರಿಸುವ ಸಲುವಾಗಿ ಅವರು ಎಂಟನೇ ತರಗತಿಯಲ್ಲಿ ಶಾಲೆಯನ್ನು ತೊರೆದರು. ಅವರು ಪಳನಿಯಪ್ಪ ಪಿಳ್ಳೈ ಬಾಯ್ಸ್ ಕಂಪನಿಗೆ, ತಿಂಗಳಿಗೆ ರೂ.೨೫ ಸಂಬಳಕ್ಕೆ ಸೇರಿದರು. ನಂತರ ಅವರು ನಾಯಕ ನಟಿಯಾಗಿ ತಮ್ಮ ಪ್ರತಿ ಪ್ರದರ್ಶನದಲ್ಲಿ ರೂ. ೩೦೦ ಸಂಪಾದಿಸಿದರು. ಅವರು ಜಾತಿ ಆಧಾರಿತ ಅಸ್ಪೃಶ್ಯತೆ ಸಮಸ್ಯೆಯೊಂದಿಗೆ ತೊಡಗಿಸಿಕೊಳ್ಳಲು ವೇದಿಕೆಯಲ್ಲಿ ಎಸ್‌ಎಸ್ ವಿಶ್ವನಾಥದಾಸ್ ಅವರೊಂದಿಗೆ ಸೇರಿಕೊಂಡರು. ಜಾನಕಿ ಅಮ್ಮಾಳ್ ತಮ್ಮ ತಂಡದ ಹಾರ್ಮೋನಿಯಂ ವಾದಕರಾದ ಗುರುಸಾಮಿ ನಾಯ್ಡು ಅವರನ್ನು ವಿವಾಹವಾದರು. == ವೃತ್ತಿ == ಇವರು ಬ್ರಿಟಿಷರಿಂದ ಬಂಧನಕ್ಕೊಳಗಾಗಿದ್ದ ಮೊದಲ ದಕ್ಷಿಣ ಭಾರತದ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ೧೯೩೦ ರಲ್ಲಿ ತಿರುನಲ್ವೇಲಿಯಲ್ಲಿ ಪ್ರದರ್ಶನ ನೀಡುತ್ತಿರುವಾಗ ಅವರನ್ನು ಮೊದಲ ಬಾರಿ ಬಂಧಿಸಲಾಯಿತು. ಪರಿಣಾಮವಾಗಿ, ಒಂದು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಡಿಫೆನ್ಸ್ ಆಫ್ ಇಂಡಿಯಾ ನಿಯಮಗಳ ಅಡಿಯಲ್ಲಿ ತಿರುಚ್ಚಿಯಲ್ಲಿ ಯುದ್ಧ-ವಿರೋಧಿ ಪ್ರಚಾರದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಇನ್ನೊಮ್ಮೆ ಬಂಧಿಸಲಾಯಿತು. ಅವರು ವೈಯಕ್ತಿಕ ಸತ್ಯಾಗ್ರಹ ಚಳವಳಿಯ ಸಕ್ರಿಯ ರಾಜಕೀಯ ಸದಸ್ಯರಲ್ಲಿ ಒಬ್ಬರಾಗಿದ್ದರು. ೧೯೩೬ ರಲ್ಲಿ, ಅವರು ಕಾಂಗ್ರೆಸ್ ಪಕ್ಷವನ್ನು ಸೇರಿದರು ಮತ್ತು ಮಧುರೈ ಕಾಂಗ್ರೆಸ್ ಸಮಿತಿಯಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡಿದರು ನಂತರ ಅವರು ಕಾಂಗ್ರೆಸ್ ಸಮಾಜವಾದಿ ಪಕ್ಷಕ್ಕೆ ಸೇರಿಕೊಂಡರು. ಅವರು ೧೯೪೦ ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೇರಿದರು. ಪಕ್ಷದ ವಿಭಜನೆಯ ನಂತರ, ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಗೆ ತೆರಳಿದರು. ಜಾನಕಿ ಅಮ್ಮಾಳ್ ಮತ್ತು ಪೊನ್ಮಲೈ ಪಾಪ ಉಮಾನಾಥ್ ಅವರು ೧೯೭೪ ರಲ್ಲಿ ತಮಿಳುನಾಡು ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಶನ್‌ನ ಸಂಸ್ಥಾಪಕರಾಗಿದ್ದರು. == ವೈಯಕ್ತಿಕ ಜೀವನ == ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅವರು ಆಹಾರಕ್ಕಾಗಿ ಹಣವನ್ನು ಸಂಗ್ರಹಿಸಲು, ಪಕ್ಷದ ಕಾರ್ಯಕರ್ತರಿಗೆ ತಮ್ಮ ಆಭರಣಗಳು ಮತ್ತು ರೇಷ್ಮೆ ಬಟ್ಟೆಗಳನ್ನು ಮಾರಾಟ ಮಾಡಿದರು. ಪುನರಾವರ್ತಿತ ಬಂಧನಗಳು ಮತ್ತು ಎಂದಿಗೂ ಮುಗಿಯದ ಕಠಿಣ ಪರಿಶ್ರಮ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತು. ಅವರು ೧ ಮಾರ್ಚ್ ೧೯೯೨ ರಂದು ಅಸ್ತಮಾದಿಂದ ನಿಧನರಾದರು == ಉಲ್ಲೇಖಗಳು ==